ಕನ್ನಡ ನಾಡಿದು
ಕವಿಗಳ ಬೀಡಿದು
ವೀರ ಕಲಿಗಳ
ಹೆತ್ತೊಡಲಿದು
ಭವ್ಯ ಸಂಸ್ಕೃತಿಯ
ತವರೂರಿದು
ಗಂಧ ಶ್ರೀಗಂಧವ
ಸೂಸಿದ ನಾಡಿದು
ಕಲೆ ಸಾಹಿತ್ಯದಿ
ಮೆರೆದಿಹುದು
ತ್ಯಾಗ ಪ್ರೀತಿಗೆ
ಮೊದಲಿಹುದು
ಕನ್ನಡ ವೈರಿಯ
ಮನವನು ಒಲಿಸಿ
ಕನ್ನಡ ಭಾಷೆಯ
ಬೆಳೆಸಿಹುದು
ಕವಿ ಪುಂಗವರನು
ಸ್ಮರಿಸೋಣ
ನಾಡಗೀತೆಯನು
ಹಾಡೋಣ
ಕನ್ನಡಕ್ಕಾಗಿ
ಮಡಿಯೋಣ
ಕನ್ನಡ ನೆಲದಿ
ಜನಿಸೋಣ
---ಮಹಾಂತೇಶ ದೊಡ್ಡಮನಿ
ಶನಿವಾರ, ಫೆಬ್ರವರಿ 20, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ