ಶನಿವಾರ, ಫೆಬ್ರವರಿ 20, 2010

ಕನ್ನಡ ನಾಡು

ಕನ್ನಡ ನಾಡಿದು
ಕವಿಗಳ ಬೀಡಿದು
ವೀರ ಕಲಿಗಳ
ಹೆತ್ತೊಡಲಿದು

ಭವ್ಯ ಸಂಸ್ಕೃತಿಯ
ತವರೂರಿದು
ಗಂಧ ಶ್ರೀಗಂಧವ
ಸೂಸಿದ ನಾಡಿದು

ಕಲೆ ಸಾಹಿತ್ಯದಿ
ಮೆರೆದಿಹುದು
ತ್ಯಾಗ ಪ್ರೀತಿಗೆ
ಮೊದಲಿಹುದು

ಕನ್ನಡ ವೈರಿಯ
ಮನವನು ಒಲಿಸಿ
ಕನ್ನಡ ಭಾಷೆಯ
ಬೆಳೆಸಿಹುದು

ಕವಿ ಪುಂಗವರನು
ಸ್ಮರಿಸೋಣ
ನಾಡಗೀತೆಯನು
ಹಾಡೋಣ

ಕನ್ನಡಕ್ಕಾಗಿ
ಮಡಿಯೋಣ
ಕನ್ನಡ ನೆಲದಿ
ಜನಿಸೋಣ

    ---ಮಹಾಂತೇಶ ದೊಡ್ಡಮನಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ